ಜೀವನವೇ ಒಂದು ಜೋಕಾಲಿ
ಪ್ರೀತಿ ಕಣ್ಮರೆಯಾದಾಗ ಹೃದಯ ಖಾಲಿ ಖಾಲಿ
ಅವಳಿಲ್ಲದೆ ನೀ ಬದುಕುವುದ ಕಲಿ
ಕೈ ಕೊಟ್ಟು ಹೋದವಳ ಬಗ್ಗೆ ಚಿಂತಿಸದಿರು
ಮೂರೇ ಮೂರು ದಿನದ ಹುಸಿ ಪ್ರೀತಿಯ ನೆನೆಯದಿರು
ಪ್ರೀತಿಯ ಕೊಳದಲ್ಲಿ ಹೆಣ್ಣಿನ ಆಂತರ್ಯವ ಹುಡುಕದಿರು
ನೆನಪುಗಳ ಕೆದಕಿ ಕೆದಕಿ ಕೊರಗದಿರು ನೀ ಮರುಗದಿರು
ಹಗಲು ಇರುಳು ಅವಳ ನೆನಪಲ್ಲೇ ಕಾಲ ಕಳೆದೆ ಗೆಳೆಯ
ಆ ನೆನಪುಗಳ ಚಕ್ರವ್ಯೂಹದಿಂದ ಹೊರಗೆ ಬಾ ಆತ್ಮೀಯ
ನೀ ನೋಡಬೇಕಿರುವುದು ಸಾಕಷ್ಟಿದೆ ಕಣ್ತೆರೆದು ನೋಡೆಯ
ನೀ ಸಾಧಿಸಬೇಕಿರುವುದು ಬೇಕಾದಷ್ಟಿದೆ ಮನಸಿಟ್ಟು ಮಾಡೆಯ
- Vರ ( Venkatesha ರಂಗಯ್ಯ )
Tuesday, March 24, 2009
Monday, March 23, 2009
ಗೆಳೆಯನ ಪ್ರಾರ್ಥನೆ
ಪ್ರೀತಿ ಮಂತ್ರ ಜಪಿಸುತಿರುವ ಪ್ರೇಮಿ ನಾನು
ಪ್ರೇಮ ದೇವತೆ ನಿನ್ನ ದರ್ಶನಕ್ಕಾಗಿ ಕಾದಿರುವೆ ನಾನು
ನಿನ್ನಿಂದ ದೂರ ನಿಂತು ನರಳುತಿದೆ ಈ ಜೀವ
ನಿನ್ನಿಂದ ಮಾತ್ರ ಸಾಧ್ಯ ತುಂಬಲು ಪ್ರೀತಿಯ ಅಭಾವ
ಪ್ರೇಮ ದೇವತೆ ನಿನ್ನ ದರ್ಶನಕ್ಕಾಗಿ ಕಾದಿರುವೆ ನಾನು
ನಿನ್ನಿಂದ ದೂರ ನಿಂತು ನರಳುತಿದೆ ಈ ಜೀವ
ನಿನ್ನಿಂದ ಮಾತ್ರ ಸಾಧ್ಯ ತುಂಬಲು ಪ್ರೀತಿಯ ಅಭಾವ
ನಮ್ಮನ್ನು ಅಗಲುವಂತೆ ಮಾಡಿತ್ತು ಆ ಸುಡುಗೆಂಪು ಜಾವ
ನನ್ನೊಲವಿನ ಗೆಳತಿಯ ಸಿಗುವಂತೆ ಮಾಡುವೆಯ ಮುಂಜಾವ
ಸಣ್ಣ ಸಣ್ಣ ಕಾರಣಗಳಿಗೆ ನಡೆದು ಹೋಗಿತ್ತು ನಮ್ಮಿಬ್ಬರ ನಡುವೆ ಘರ್ಷಣೆ
ನನ್ನ ತಪ್ಪು ಮನ್ನಿಸಿ ಮರಳಿ ಬಾ ಬಳಿಗೆ ಎನ್ನುವುದು ನನ್ನ ಪ್ರಾರ್ಥನೆ
ನನ್ನೊಲವಿನ ಗೆಳತಿಯ ಸಿಗುವಂತೆ ಮಾಡುವೆಯ ಮುಂಜಾವ
ಸಣ್ಣ ಸಣ್ಣ ಕಾರಣಗಳಿಗೆ ನಡೆದು ಹೋಗಿತ್ತು ನಮ್ಮಿಬ್ಬರ ನಡುವೆ ಘರ್ಷಣೆ
ನನ್ನ ತಪ್ಪು ಮನ್ನಿಸಿ ಮರಳಿ ಬಾ ಬಳಿಗೆ ಎನ್ನುವುದು ನನ್ನ ಪ್ರಾರ್ಥನೆ
ಸೂರ್ಯನಿಗೆ ಹೇಳಿರುವೆ ನಿನಗೆ ಸುಮ್ ಸುಮ್ನೆ ಸುಡಬೇಡೆಂದು
ಗುಲಾಬಿ ಮುಳ್ಳುಗಳಿಗೆ ಮನವಿ ಮಾಡಿರುವೆ ನಿನಗೆ ಚುಚ್ಚಬೇಡೆಂದು
ದುಂಬಿಗಳಲ್ಲಿ ಪ್ರಾರ್ಥನೆ ಮಾಡಿರುವೆ ಮಕರಂದ ಹೀರಬೇಡೆಂದು
ಏಕೆಂದರೆ ನಿನ್ನ ಮನವೊಲಿಸಲು ನನ್ನಲ್ಲಿರುವುದು ಹೂವು ಒಂದೇ ಒಂದು
- Vರ ( Venkatesha ರಂಗಯ್ಯ )
ದುಂಬಿಗಳಲ್ಲಿ ಪ್ರಾರ್ಥನೆ ಮಾಡಿರುವೆ ಮಕರಂದ ಹೀರಬೇಡೆಂದು
ಏಕೆಂದರೆ ನಿನ್ನ ಮನವೊಲಿಸಲು ನನ್ನಲ್ಲಿರುವುದು ಹೂವು ಒಂದೇ ಒಂದು
- Vರ ( Venkatesha ರಂಗಯ್ಯ )
Sunday, March 15, 2009
ನಗು ನಗುತ ನಲಿ ಏನೇ ಆಗಲಿ
ನಗುತ ನಗುತ ಇರಬೇಕು ನಕ್ಕು ನಗಿಸುತಲಿರಬೇಕು
ಏನೇ ಕಷ್ಟ ಬಂದರು ಸರಿಯೇ ಅಳುವುದ ಮರೆತು ನಗಬೇಕು
ಎಷ್ಟೇ ಒತ್ತಡ ಇದ್ದರು ಕೂಡ ತಿಳಿಕೊಳದಂತೆ ಮನಸಿರಬೇಕು
ಅಂಗಳದಿ ಚೆಲ್ಲಿರುವ ಬೆಳದಿಂಗಳಂತೆ ಬಾಳಲಿ ನೆಮ್ಮದಿ ಇರಬೇಕು
ಪ್ರೀತಿಯೊಂದೆ ರಾಮಬಾಣ ಜೀವನವನ್ನು ಹಸನಾಗಿಸಲು
ಒಲವಿನ ಮನಸೇ ಶಾಂತಿಯ ತಾಣ ದುಃಖವನೆಲ್ಲ ಮರೆಸಲು
ನೋವನ್ನೆಲ್ಲ ಹೊಡೆದು ಬಡೆದು ಜೀವನದಿಂದ ಕಿತ್ತೆಸೆಯಲು
ಬಾಳಿನಲ್ಲಿರುವ ಕತ್ತಲೆಯ ಮರೆಯಾಗಿಸುವುದು ಸುಖದ ಹೊನಲು
- Vರ ( Venkatesha ರಂಗಯ್ಯ )
ಏನೇ ಕಷ್ಟ ಬಂದರು ಸರಿಯೇ ಅಳುವುದ ಮರೆತು ನಗಬೇಕು
ಎಷ್ಟೇ ಒತ್ತಡ ಇದ್ದರು ಕೂಡ ತಿಳಿಕೊಳದಂತೆ ಮನಸಿರಬೇಕು
ಅಂಗಳದಿ ಚೆಲ್ಲಿರುವ ಬೆಳದಿಂಗಳಂತೆ ಬಾಳಲಿ ನೆಮ್ಮದಿ ಇರಬೇಕು
ಪ್ರೀತಿಯೊಂದೆ ರಾಮಬಾಣ ಜೀವನವನ್ನು ಹಸನಾಗಿಸಲು
ಒಲವಿನ ಮನಸೇ ಶಾಂತಿಯ ತಾಣ ದುಃಖವನೆಲ್ಲ ಮರೆಸಲು
ನೋವನ್ನೆಲ್ಲ ಹೊಡೆದು ಬಡೆದು ಜೀವನದಿಂದ ಕಿತ್ತೆಸೆಯಲು
ಬಾಳಿನಲ್ಲಿರುವ ಕತ್ತಲೆಯ ಮರೆಯಾಗಿಸುವುದು ಸುಖದ ಹೊನಲು
- Vರ ( Venkatesha ರಂಗಯ್ಯ )
Subscribe to:
Posts (Atom)