Sunday, December 28, 2008

ಜನ್ಮ ಜನ್ಮದ ಗೆಳತಿ

ಟ್ರಿನ್ ಟ್ರಿನ್ ಟ್ರಿನ್ ರಿಂಗಣ ಮೊಳಗಲು
ಆ ಕಡೆ ಇರುವ ನೀವು ಯಾರೆಂದು ನಾ ಕೇಳಲು
ಸಿಹಿಯಾದ ದನಿಯೊಂದು ಅತ್ತಕಡೆಯಿಂದ ಬಂದಿತು
ಸೊಗಸಾದ ಕನಸಿರಬಹುದೆಂದು ಮೊದಲು ನನಗನಿಸಿತು

ನಿಮ್ಮ ಹೆಸರೇನೆಂದು ನಾ ಮತ್ತೆ ಕೇಳಲು
ಅಯ್ಯೋ ತಪ್ಪಾಗಿ ನಿಮಗೆ ಕರೆ ಮಾಡಿದೆ ಎಂದು ದನಿ ನುಡಿಯಿತು
ಆಕಸ್ಮಿಕ ಕರೆಯಿಂದ ಗೆಳತಿಯೊಬ್ಬಳು ಸಿಕ್ಕಳೆಂದು ನನಗನಿಸಿತು

ಅರೆ ಕ್ಷಣ ಮೌನದ ನಂತರ ಒಟ್ಟಿಗೆ ಕೇಳಿದೆವು ಹೆಸರೇನೆಂದು
ಅವಳೆಂದಳು ಲಕ್ಷ್ಮಿ ನಾನೆಂದೆನು ವೆಂಕಟೇಶ

ಒಂದು ಕ್ಷಣ ಅವಳು ಯಾವುದೊ ಜನ್ಮದ ಗೆಳತಿಯೆಂದು ಅನಿಸಿತು
ಮರುಕ್ಷಣ ಸ್ನೇಹದ ಆಹ್ವಾನವ ಮನಸು ಅವಳಿಗೆ ಕಳಿಸಿತು
ತತ್ ಕ್ಷಣ ಮುಗುಳ್ನಗೆಯೊಂದಿಗೆ ಅವಳಿಂದ ಒಪ್ಪಿಗೆ ಬಂದಿತು

ಇಬ್ಬರ ಮೊಗದಲ್ಲಿ ಹೊರಹೊಮ್ಮಿತು ಹರುಷ
ದೇವರಲ್ಲಿ ಬೇಡಿದೆ ಇರಲೆಂದು ಈ ಸ್ನೇಹ ನೂರು ವರುಷ

ಇಂತಿ ನಿಮ್ಮ ಪ್ರೀತಿಯ
-Vರ ( Venkatesha ರಂಗಯ್ಯ )

Monday, December 1, 2008

ಒಂಟಿ ಮನಸಿನ ಪಯಣ

ಒಂಟಿ ಮನಸಿಗೆ ಜಂಟಿಯಾಗಲು
ಜೊತೆಗಾರರು ಯಾರು ಇಲ್ಲ
ಮಾತುಗಳು ಬಹಳ ಕೇಳುವವರು ವಿರಳ
ಶುರುವಿಟ್ಟಿಹುದು ತಂತಾನೆ ಮಾತಾಡಿಕೊಳ್ಳುವುದು

ಅರಿವುಂಟು ಈ ಮನಕೆ ಕೇಳುವ ಕಿವಿಗಳು
ಈ ಜಗದಲ್ಲಿ ಇಲ್ಲ ಎಂದು
ಭಯವೂ ಇಲ್ಲ ಕರೆಯುವರು ಇದನ್ನ ಹುಚ್ಚು ಎಂದು

ದುಃಖ ಉಮ್ಮಳಿಸಿದಾಗ ಕಣ್ಣೀರು ಹರಿದಾಗ
ಬತ್ತಿ ಹೋಗುತಿದೆ ತಂತಾನೆ ಒರೆಸುವರು ಇಲ್ಲದಂತಾಗಿ
ಪ್ರಶ್ನೆಯ ಮೇಲೆ ಪ್ರಶ್ನೆಯ ಹಾಕುತಿದೆ
ಯಾರ ಹತ್ತಿರ ದುಖ ಕೊಳ್ಳಲಿ ಎಂದು
ಬೆಟ್ಟದಷ್ಟಿಹುದು ಮನಸಿನ ಕನಸುಗಳು
ಕೊನೆಯೇ ಇಲ್ಲದ ಮುಗಿಲಂತಿಹುದು ಮನಸಿನ ಮಾತುಗಳು

ಬರೆಯುತ್ತೆ ಹಾಡುತ್ತೆ ನಡೆಯುತ್ತೆ ಕುಣಿಯುತ್ತೆ
ತಂಗಾಳಿಯಲ್ಲಿ ತೇಲಾಡುತ್ತೆ ಯಾವಾಗಲು ಒಂಟಿಯಾಗಿರುತ್ತೆ
ಈ ಬಾಳ ಬಂಡಿಯಲಿ ತಾನೊಬ್ಬನೇ
ಪಯಣಿಗನೆಂದು ಅರಿತು ಮತ್ತೆ ಮುನ್ನುಗ್ಗುತ್ತೆ

- Vರ ( Venkatesha ರಂಗಯ್ಯ )

Thursday, October 23, 2008

ದೀಪಾವಳಿ - ಚೆಲ್ಲುತಿದೆ ಮನಕೆ ಬೆಳಕು

ಮರಳಿ ಬಂದಿವುದು ದೀಪಾವಳಿ
ಹಚ್ಚಲೆಂದು ಮನೆ ಮಂದಿಯೆಲ್ಲ ದೀಪ
ಚೆಲ್ಲಲಿ ದೀಪದ ಬೆಳಕು ಎಲ್ಲರ ಬಾಳಲ್ಲಿ
ತರಲಿ ಇದು ಹರುಷವ ಎಲ್ಲರ ಮನದಲ್ಲಿ
ಬೆಳಕಾಗಲಿ ಜಗವೆಲ್ಲ ಬೆಳಗಲಿ ಬದುಕೆಲ್ಲ
ಹಚ್ಚೋಣ ದೀಪ ಕಳೆದುಕೊಳ್ಳೋಣ ಪಾಪ
ಉರಿಯಲಿ ದೀಪ ಸದಾ ಎಲ್ಲ ಮನೆಗಳಲ್ಲಿ
ಇದು ಕತ್ತಲೆ ಹೊಡೆದೊಡಿಸೋ ದೀಪ
ಬೆಳಕು ಚೆಲ್ಲಿ ದಾರಿ ತೋರಿಸೋ ದೀಪ
ಮನಸೆಂಬ ದೀಪಕ್ಕೆ ಒಲವೆಂಬ ಎಣ್ಣೆಯನು ಎರೆಯೋಣ
ಪ್ರೀತಿಯಿಂದ ಮನಸಿನ ದೀಪವನು ಹಚ್ಚೋಣ
ದೀಪಾವಳಿಯ ಶುಭಾಶಯ ಹೇಳುತ ಪ್ರೀತಿಯನು ಹಂಚೋಣ

-Vರ ( Venkatesha ರಂಗಯ್ಯ )

Tuesday, October 7, 2008

ಜಿಪುಣ ನನ್ನ ಗಂಡ

ಮೈಸೂರು ದಸರೆಗೆ ಹೋಗೋಣ ಬಾರೇ
ಚಾಮುಂಡಿ ದೇವಿಯ ಅಂಬಾರಿ ನೋಡೋಣ ಬಾರೇ
ಜಗಮಗಿಸುತಿದೆ ಮೈಸೂರು ಬೆಳಕಲ್ಲಿ
ಕೈ ಬೀಸಿ ಕರೆಯುತಿದೆ ರಂಗವಲ್ಲಿ
ಜಟಕಾ ಕುದುರೆ ಹತ್ತಿ ಮೈಸೂರು ಸುತ್ತೋಣ
ಕೃಷ್ಣ ರಾಜ ಸಾಗರದಲ್ಲಿ ಮೈ ಮರೆಯೋಣ
ಜೇಬ್ರ ಕೋಬ್ರಾ ಹುಲಿ ಸಿಂಹ zooನಲ್ಲಿ
ಸೂಟು ಬೂಟು ರಾಜಾಸೀಟು ಅರಮನೆಯಲ್ಲಿ
ಇನ್ನೇನು ನೋಡಬೇಕು ಕೇಳು ಜಾಣೆ
ಗ್ಯಾರೆಂಟಿ ಕರಕೊಂಡು ಹೋಗ್ತೀನಿ ನಿನ್ನಾಣೆ
ಬರೀ ಸುಳ್ಳು ಬರೀ ಸುಳ್ಳು ನಾನು ನಂಬೋದಿಲ್ಲ
ನಾನು ಕರಕೊಂಡು ಹೋಗೋಕೆ ಹೇಳಿದ್ದು ಲಲಿತ್ ಮಹಲ್ ಗೆ
ಆದ್ರೆ ನೀವು ಕರಕೊಂಡು ಹೋಗಿದ್ದು ಒಂಟಿಕೊಪ್ಪಲ್ ಗೆ
ನಾನು ನಂಬೋದಿಲ್ಲ ನಿಮ್ಮನ್ನ ನಾನು ನಂಬೋದಿಲ್ಲ .


ಇಂತಿ ನಿಮ್ಮ ಪ್ರೀತಿಯ
-Vರ ( Venkatesha ರಂಗಯ್ಯ )

Monday, September 15, 2008

ನಿಮ್ಮ ಹುಡುಗಿನ ನೀವು ಎಷ್ಟು ಅರ್ಥ ಮಾಡಿಕೊಂಡಿದೀರ ???

ಹುಡುಗೀರಿಗೂ ಹೂವಿಗೂ ಹೋಲಿಕೆ ಇದೆ ಅನ್ನೋದನ್ನ ನಮ್ಮ ಶ್ರೇಷ್ಠ ಕವಿಗಳು ಅವರ ಕವನದಲ್ಲಿ ಆಗ್ಲೇ ಬರೆದಿದ್ದಾರೆ. ಈ ಸತ್ಯಾನ ನಮಗೆ ಸಾರಿ ಹೇಳಿದಾರೆ. ಆದರೆ ಹೂವಿಗೂ ಹೆಣ್ಣಿಗೂ ಇರುವ ಹೋಲಿಕೆ ನಮಗಿನ್ನು ಸರಿಯಾಗಿ ಗೊತ್ತಿಲ್ಲ ಅನ್ನೋದು ನನ್ನ ಭಾವನೆ. ಇದರ ಬಗ್ಗೆ ನನ್ನ ಅಭಿಪ್ರಾಯ ಇಲ್ಲಿದೆ ನೋಡಿ. ಎಷ್ಟು ಜಾತಿ ಹೂವುಗಳು ಈ ಪ್ರಪಂಚದಲ್ಲಿ ಇದಾವೋ ಅಷ್ಟು ರೀತಿಯ ಹುಡುಗೀರು ಇದಾರೆ ಸ್ವಾಮಿ. ಕೆಲವರು ಮಲ್ಲಿಗೆ ಇದ್ದ ಹಾಗೆ, ಇನ್ನು ಕೆಲವರು ಗುಲಾಬಿ ಇದ್ದ ಹಾಗೆ, ಇನ್ನು ಕೆಲವರು ಸಂಪಿಗೆ, ಇನ್ನು ಕೆಲವರು ಕಾಲಿಫ್ಲೋವೆರ್ !!!. ಹೀಗೆ ಇನ್ನು ಅನೇಕಾನೇಕ ಹುಡುಗೀರು ಇದಾರೆ. ಒಂದು ಹುಡುಗಿ ಯಾವ್ ಜಾತಿ ಹೂವಿಗೆ ಸೇರುತ್ತಾಳೆ ಅನ್ನೋದು ಹೂವಿನ ಗುಣ ಮತ್ತು ಹೆಣ್ಣಿನ ಗುಣದ ಹೋಲಿಕೆಯಿಂದ ಗೊತ್ತಾಗುತ್ತೆ. ಒಂದು ಉದಾಹರಣೆ ಇಲ್ಲಿ ಕೊಡ್ತೀನಿ. ಗುಲಾಬಿ ಹೂವಿನಲ್ಲಿ ಮ್ರುದುತ್ವನು ಇದೆ, ಚುಚ್ಚೋ ಸ್ವಭಾವನು ಇದೆ. ಗುಲಾಬಿ ಹೂವಿನ ಎಲೆ ಮುಟ್ಟಿದಾಗ ಆನಂದ ಸಿಗುತ್ತೆ, ಮುಳ್ಳು ಮುಟ್ಟಿದಾಗ ನೋವಾಗುತ್ತೆ. ಗುಲಾಬಿ ಥರ ಇರೋ ಹುಡುಗೀರು ಕೆಲವು ಸಲ ಅವರ ಒಳ್ಳೆತನದಿಂದ ತುಂಬ ಖುಷಿಯಾಗಿರ್ತಾರೆ. ಕೆಲವು ಸಲ ಸಕತ್ ಕಿರ್ಕಿರಿ ಮಾಡ್ತಾರೆ. ಇನ್ನು ಕೆಲವರು ನೋಡೋದಿಕ್ಕೆ ಸೀದಾ ಸಾದಾ ಥರ ಇರ್ತಾರೆ ಆದ್ರೆ ತುಂಬ ತಲೆ ತಿಂತಾರೆ. ಹೀಗೆ ಯೋಚನೆ ಮಾಡಿದ್ರೆ ಹೋಲಿಕೆಗಳು ಸಿಗ್ತವೆ. ನಾನು ಹೇಳ್ತಾ ಇರೋದು ನೂರಕ್ಕೆ ನೂರರಷ್ಟು ಸತ್ಯ ಅಂತ ಅಲ್ಲ..ಕೆಲವು ಹೋಲಿಕೆಗಳು ಇದ್ದೆ ಇರ್ತವೆ ಅನ್ನೋದು ನನ್ನ ಅಭಿಪ್ರಾಯ. ಹೂವಿನ ಗುಣದ ಬಗ್ಗೆ ನಮಗೆ ಚೆನ್ನಾಗಿ ಗೊತ್ತಿರೋದ್ರಿಂದ ನಿಮ್ಮ ಮನದರಸಿ ಗುಣ ಯಾವುದು ಅಂಥ ಅರ್ಥ ಮಾಡಿಕೊಳ್ಳೋಕೆ ಸುಲಭ ಆಗುತ್ತೆ. ಅವರ ಗುಣ ಅರ್ಥ ಆದಾಗ , ಅವರ ಜೊತೆ ಹೇಗೆ ಇರಬೇಕು ಅನ್ನೋದು ಗೊತ್ತಾಗುತ್ತೆ. ಈ ಸತ್ಯ ತಿಳಿದಾಗ ಹೂವು(ಹುಡುಗಿ) ಬಾಡದ (ಬೇಜಾರಾಗದ) ಹಾಗೆ ನೀವು ನೋಡಿಕೊಳ್ತೀರ. ಆಗ ನಿಮ್ಮ ಜೀವನ ಸಕತ್ ಚೆನ್ನಾಗಿರುತ್ತೆ....ನೀವೇನಂತೀರಾ ಗೆಳೆಯರೇ ಮತ್ತು ಗೆಳತಿಯರೆ ?

ಇಂತಿ ನಿಮ್ಮ ಪ್ರೀತಿಯ
-Vರ ( Venkatesha ರಂಗಯ್ಯ )

Thursday, September 11, 2008

ರಂಗೋಲಿ ನಾಯಕಿ

ಮನೆಯ ಮುಂದಿರುವ ರಂಗೋಲಿ ನಲಿಯುತಲಿ
ಹಾಕಿದ ನಾರಿ ನಿಂತಿಹಳು ಬಾಗಿಲ ಬಳಿ
ಕಣ್ಣಿಂದ ಆಹ್ವಾನ ಬಂದಿವುದು ನಗೆ ಚೆಲ್ಲುತ್ತ
ಬೇರೆ ಯಾರಿಗೋ ಇರಬಹುದೆಂದು ನೋಡಿದೆ ಸುತ್ತ ಮುತ್ತ
ಕಂಡಳು ಎಂದು ನಾ ಕಾಣದ ರಾಜಕುಮಾರಿಯಂತೆ
ಕಾಣುತಿಹಳು ಅತಿಸುಂದರ ಅಲಂಕಾರಗಳೇ ಇಲ್ಲದಂತೆ
ಕಣ್ಣ್ ರೆಪ್ಪೆಗಳು ಏನನ್ನೋ ಸನ್ನೆ ಮಾಡುತ್ತಿವೆ ಅವಳಿಗೆ ಅರಿವಿಲ್ಲದಂತೆ
ಅವಳ ಕಣ್ಣುಗಳಿಗೆ ಸೋತುಹೋಗಿ ನಾ ಬಯಸುತಿರುವೆ ಅವಳ ಜೊತೆ

-Vರ ( Venkatesha ರಂಗಯ್ಯ )

Wednesday, September 10, 2008

ಮುಂಗಾರು ಮಿಂಚು

ಮುಂಗಾರಿನ ಮಿಂಚಂತೆ ನನ್ನೆದುರು ನೀ ಬಂದೆ
ಮತ್ತೆ ಸುಳಿವಿಲ್ಲದಂತೆ ಮರೆಯಾಗಿ ಹೋದೆ
ಸುರಿದಿತ್ತು ಕಂಬನಿ ನನ್ನೆದೆಯಲ್ಲಿ ನೀನಿಲ್ಲದೆ
ಕಣ್ಣ ಹನಿಗಳು ಬೋರ್ಗರೆಯುತ್ತಿವೆ ನಿನ್ನನ್ನು ಕರೆಯಲು
ಪ್ರತಿಯೊಂದು ಹನಿ ಇಂದು ಹೇಳುತಿದೆ ಮಾತೊಂದು
ಬಯಸುತಿದೆ ಮನಸಿಂದು ನೀ ಸನಿಹ ಬೇಕೆಂದು
ನನ್ನ ಹೃದಯವನು ಕದ್ದೆ ಜೊತೆಯಲ್ಲೇ ನಿದ್ದೆಯನು ಕದ್ದೆ
ನಿನ್ನ ನೋಡಲಾರದೆ ಮುಚ್ಚಲೊಪ್ಪವು ಕಣ್ಣುಗಳು
ಕಾರ್ಮೋಡ ಧರೆಗಿಳಿಯಲು ಕಾದಿರುವಂತೆ
ತುದಿಗಾಲಲ್ಲಿ ನಿಂತು ನಿನಗಾಗಿ ನಾ ಕಾಯುತಿರುವೆ.

-Vರ ( Venkatesha ರಂಗಯ್ಯ )

Tuesday, September 9, 2008

ಕನ್ನಡ ಟಿವಿ ವಾಹಿನಿಯಲ್ಲಿ ಪ್ರಸಾರ ಆಗ್ತ ಇರುವ ಸ್ವಾಭಾವಿಕ ಕಾರ್ಯಕ್ರಮ(ರಿಯಾಲಿಟಿ ಶೋ) ದ ಯಶಸ್ಸಿಗೆ ಹಿಂದಿ ಇಂಗ್ಲಿಷ್ ಅವಶ್ಯಕತೆ ಇದೆಯೇ ?

ನನ್ನ ಪ್ರೀತಿಯ ಕನ್ನಡಿಗರೇ, ನಮ್ಮ ಭಾಷೆ ಕನ್ನಡದ ಸ್ಥಿತಿ ಗತಿ ಏನಾಗಿದೆ ಅನ್ನೋ ವಿಷಯ ಸುಮಾರು ದಿನದಿಂದ ನನಗೆ ಕಾಡ್ತಾನೆ ಇದೆ. ಮೊನ್ನೆ ಹೀಗೆ ಯೋಚನೆ ಮಾಡ್ತಾ ಇದ್ದೆ. ಆಗ ನನಗೆ ಕಾಡಿದ ಪ್ರಶ್ನೆ " ಕನ್ನಡ ಟಿವಿ ವಾಹಿನಿಯಲ್ಲಿ ಪ್ರಸಾರ ಆಗ್ತ ಇರುವ ಸ್ವಾಭಾವಿಕ ಕಾರ್ಯಕ್ರಮ(ರಿಯಾಲಿಟಿ ಶೋ) ದ ಯಶಸ್ಸಿಗೆ ಹಿಂದಿ ಇಂಗ್ಲಿಷ್ ಅವಶ್ಯಕತೆ ಇದೆಯೇ ? " . ನಾನು ಇತ್ತೀಚೆಗೆ ಗಮನಿಸ್ತಾ ಇರೋದು ಏನಂದ್ರೆ ಮಕ್ಕಳು ಹಿಂದಿ ಹಾಡಿಗೆ ನೃತ್ಯ ಮಾಡ್ತಾರೆ ಇಲ್ಲ ದೊಡ್ಡವರು ಹಿಂದಿ ಹಾಡುಗಳನ್ನ ಹಾಡ್ತಾರೆ. ಯಾಕ್ ಸ್ವಾಮಿ ಕನ್ನಡದಲ್ಲಿ ಚೆನ್ನಾಗಿರೋ ಹಾಡುಗಳು ನಿಮಗೆ ಸಿಗೊದಿಲ್ವೆ. ಅರ್ . ಏನ್ . ಜಯಗೋಪಾಲ್ , ಚಿ. ಉದಯಶಂಕರ್, ವಿಜಯನಾರಸಿಂಹ ಅಂಥವರು ಎಷ್ಟು ಚೆನ್ನಾಗಿ ಒಳ್ಳೆ ಹಾಡುಗಳನ್ನ ಬರೆದಿದ್ದಾರೆ. ನಮ್ಮ ಹಾಡುಗಳನ್ನ ಹಾಡೋದು ಬಿಟ್ಟು ನಿಮಗೆ ಹಿಂದಿ ಹಾಡೇ ಆಗಬೇಕೆ ಹಾಡೋದಿಕ್ಕೆ, ನಿಮ್ಮ ಪ್ರತಿಭೆನಾ ತೋರಿಸೋದಿಕ್ಕೆ. ರಿಯಾಲಿಟಿ ಶೋ ಕಾರ್ಯಕ್ರಮದ ಇನ್ನೊಂದು ವಿಶೇಷ ಏನಂದ್ರೆ ಕಾರ್ಯಕ್ರಮ ಶುರು ಆಗೋದೇ ಆಂಗ್ಲ ಆಮಂತ್ರಣ ವಾಕ್ಯದಿಂದ. ಹಾಡು ಹೇಳಿದವರಿಗೆ, ನೃತ್ಯ ಮಾಡಿದವರಿಗೆ ಪ್ರಶಂಸೆ ಕೂಡ ಸಿಗೋದು ಇಂಗ್ಲಿಷ್ನಲ್ಲೇ . ನಮ್ಮ ಜಡ್ಜಸ್ಗಳೆಲ್ಲ ಕನ್ನಡ ಚಿತ್ರರಂಗದ ಅತಿರತ ಮಹಾರತರೆ. ನಿಮಗೆ ನಾನು ಕೇಳೋದು ಒಂದೇ ಪ್ರಶ್ನೆ , ಕನ್ನಡದಲ್ಲಿ ಮಾತಾಡಿದ್ರೆ ನಿಮಗೆ ಅವಮಾನ ಆಗುತ್ತ. ಟಿವಿ ಸಂದರ್ಶನದಲ್ಲಿ ಕೂಡ ನಿಮ್ಮ ಚಿತ್ರಗಳ ಬಗ್ಗೆ ಮಾತಾಡ್ಬೇಕಾದ್ರೆ ಇಂಗ್ಲಿಷ್ ನಲ್ಲಿ ಮಾತಾಡಿದ್ರೆ ಸತ್ಯವಾಗಲು ಕನ್ನಡಿಗರು ನಿಮ್ಮ ಚಿತ್ರನ ನೋಡಲ್ಲ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ಸಿಗೋದಕ್ಕೆ ನಾವೆಲ್ಲ ಒಗ್ಗಟ್ಟಾಗಿ ದುಡಿತ ಇರಬೇಕಾದ್ರೆ, ನೀವು ಹೀಗೆ ಮಾಡ್ತಾ ಇರೋದು ಸರೀನಾ???

ಇಂತಿ ನಿಮ್ಮ ಪ್ರೀತಿಯ
-Vರ ( Venkatesha ರಂಗಯ್ಯ )

ನಟಸಾರ್ವಭೌಮನಿಗೆ ನಮಸ್ಕಾರ

ಕನ್ನಡ ನಾಡಿನ ಹೆಮ್ಮೆಯ ಕುವರ
ನಮ್ಮ ನಿಮ್ಮೆಲ್ಲರ ರಾಜಕುಮಾರ
ಹುಟ್ಟಿದ್ದು ತಾಯಿಯ ತವರೂರಾದ ಗಾಜನೂರು
ಹುಟ್ಟಿ ಬೆಳೆಯಿತು ಇವರ ಅಭಿಮಾನಿ ಬಳಗ ಸಾವಿರಾರು
ನಡೆ ನುಡಿಯಲ್ಲಿ ಇವರೆಂದು ಸರಳ ಸಜ್ಜನ
ಆದರು ಸೆಳೆದು ಹಿಡಿದಿಟ್ಟಿತು 108 ದಿನ ಕಾನನ
ಒಲಿದು ಬಂದವು ಇವರಿಗೆ ಪ್ರಶಸ್ತಿಗಳು ಅನೇಕಾನೇಕ
ತರಲಿಲ್ಲ ಅವು ಎಂದು ಗರ್ವ ಅಹಂಕಾರ
ಹಾಡಿ ಹರಡಿದರು ಕನ್ನಡದ ಕಂಪನ್ನು
ಬೆಳೆಸಿದರು ಮುಗಿಲೆತ್ತರಕೆ ಕನ್ನಡವನ್ನು
ಗಳಿಸಿದರು ಈ ನಾಡ ಜನರ ಪ್ರೀತಿಯನ್ನು
ದೀಪ ಹಾರಿ ಹೋಯಿತಾದರೂ ಕೊಟ್ಟ ಬೆಳಕು ನಿರಂತರ
ಜನ ಮಾನಸದಲ್ಲಿ ರಾಜಣ್ಣ ಎಂದೆಂದೂ ಅಜರಾಮರ

-Vರ ( Venkatesha ರಂಗಯ್ಯ )

ಪ್ರೀತಿಯ ಫಿಲಾಸಫಿ

ಪ್ರೀತಿ ಕಣ್ಣಿಗೆ ಕಾಣೋಲ್ಲ ಆದರು ನಾವು ಅನಂದಿಸಲ್ವಾ , ಆಹ್ಲಾದಿಸಲ್ವಾ, ಕುರುಡು ಪ್ರೇಮಿಯಾಗಿ ಪ್ರೀತಿಸೋದಿಲ್ವಾ.
ನಾವು ಈ ಜಗತ್ತಿನಲ್ಲಿ ಎಲ್ಲವನ್ನು ಪ್ರೀತಿಸ್ತೀವಿ. ಹಾಕ್ಕೊಳ್ಳೋ ಬಟ್ಟೇನ ಪ್ರೀತಿಸ್ತೀವಿ, ತಲೆ ಬಾಚಿಕೊಳ್ತಾ ಕನ್ನಡಿಯಲ್ಲಿ ಕಾಣೋ ನಮ್ಮ ಬಿಂಬನ ಪ್ರೀತಿಸ್ತೀವಿ. ನಮ್ಮ ಬಿಂಬದ ಪಕ್ಕ ಒಬ್ಬಳು ಸುಂದರ ಹುಡುಗಿಯನ್ನ ಕಲ್ಪಿಸಿಕೊಂಡು ಅವಳನ್ನ ಪ್ರೀತಿಸ್ತೀನಿ. ನಾವು ಏನನ್ನಾದರೂ ನಿಜವಾಗ್ಲೂ ಪ್ರೀತಿಸಿದರೆ ಅದು ನಮ್ಮದು ಆಗುತ್ತೆ ಅಂಥ ಯಾರೋ ಹೇಳ್ತಿದ್ರು. ಅದು ಎಷ್ಟು ನಿಜ ಗೊತ್ತ.
ಪುಸ್ತಕನ ಪ್ರೀತಿ ಮಾಡಿದಾಗ ವಿದ್ಯೆ ನಮ್ಮದಾಗುತ್ತೆ , ಕೆಲಸಾನ ಪ್ರೀತಿ ಮಾಡಿದಾಗ ಯಶಸ್ಸು ನಮ್ಮದಾಗುತ್ತೆ , ನಮ್ಮನ್ನು ನಾವು ಪ್ರೀತಿಸಿದಾಗ ಜಗತ್ತು ನಮ್ಮದಾಗುತ್ತೆ.
ನಾವು ಪ್ರೀತಿ ಮಾಡೋದನ್ನ ನಿಲ್ಲಿಸಿದಾಗ, ನಮ್ಮ ಜೀವ ಕೂಡ ನಮ್ಮ ಜೊತೆ ಇರದಲೇ ಹೊರಟು ಹೋಗುತ್ತೆ. ಅದಕ್ಕೆ ಹೇಳೋದು ಜೀವನದಲ್ಲಿ ಏನನ್ನಾದರೂ ಬಿಡು, ಪ್ರೀತಿ ಮಾಡೋದನ್ನ ಮಾತ್ರ ಬಿಡಬೇಡ.

ಇಂತಿ ನಿಮ್ಮ ಪ್ರೀತಿಯ ,
-Vರ ( Venkatesha ರಂಗಯ್ಯ )

Thursday, September 4, 2008

ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?

ಈ ಸಾಫ್ಟವೇರ್ ಇಂಜಿನಿಯರ್ ಜೀವನ ಹೇಗೆ ಅಂದ್ರೆ ಸ್ವಲ್ಪ ದಿನ ಸ್ವರ್ಗಾನೆ ತಮ್ಮ ಕೈಲಿ ಇದೆ ಅನ್ನೋವಷ್ಟು ಖುಷಿಯಾಗಿ ಇರ್ತಾರೆ.ಇನ್ನು ಸ್ವಲ್ಪ ದಿನ ಭೂಮಿ ಭಾರ ಎಲ್ಲ ಇವರ ತಲೆ ಮೇಲೆ ಇದೆಯೇನೋ ಅನ್ನೋ ಹಾಗೆ ಇರ್ತಾರೆ. ಒಂದ್ ರೀತಿನಲ್ಲಿ ಹೇಳ್ಬೇಕು ಅಂದ್ರೆ ಇವರುಗಳ ಜೀವನ monsoon change ಆದಾಗೆ ಚೇಂಜ್ ಆಗ್ತಾನೆ ಇರುತ್ತೆ. ಅಂಥ ಸಾಫ್ಟವೇರ್ ಇಂಜಿನಿಯರ್ ಗಳಲ್ಲಿ ನಾನು ಒಬ್ಬ ಕಣ್ರೀ. ಇಷ್ಟೆಲ್ಲಾ ಟಿಪ್ಪಣಿನ ಇವನು ಏನಕ್ಕೆ ಬರೀತಾ ಇದಾನೆ ಅಂಥ ನಿಮಗೆ ಅನ್ನಿಸ್ತ ಇರಬಹುದು. ಈಗ ವಿಷಯಕ್ಕೆ ಬರ್ತೀನಿ.

ನನಗೆ ಒಬ್ಬಳು ಆತ್ಮೀಯ ಗೆಳತಿ ಇದ್ದಳು. ಪ್ರತಿ ದಿನ ಇಬ್ಬರು ಫೋನ್ ನಲ್ಲಿ ಕಷ್ಟ ಸುಖ ಮಾತಡ್ಕೊಳ್ತಾ ಇದ್ವಿ. ಪ್ರತಿ ದಿನ ನಾನೇ ಅವಳಿಗೆ ಫೋನ್ ಮಾಡ್ತಾ ಇದ್ದೆ. ನಾನು ಮಾಡ್ಲಿಲ್ಲ ಅಂದ್ರೆ ಕಾಯೋ ಅಷ್ಟು ತಾಳ್ಮೆ ಕೂಡ ಅವಳಲ್ಲಿತ್ತು. ಒಂದ್ ಸಲ ನನಗೆ ಆಫೀಸ್ನಲ್ಲಿ ತುಂಬ ಕೆಲಸ ಇತ್ತು. ಒಂದು ನಾಲ್ಕೈದು ದಿವಸ ನನ್ನನ್ನ ನಾನೇ ಮರೆಯೋ ಅಷ್ಟು ವಿಪರೀತ ಕೆಲಸ ಇತ್ತು. ಊಟ , ತಿಂಡಿ, ನಿದ್ದೆಯ ಕಡೆಗೆ ಗಮನವಿರದಷ್ಟು ಕೆಲಸದಲ್ಲಿ ಏಕಾಗ್ರತೆ!!!. ಈ ಸಮಯದಲ್ಲಿ ನನ್ನ ಆತ್ಮೀಯ ಗೆಳತಿ ಒಬ್ಬಳಿಗೆ ಫೋನ್ ಮಾಡ್ಲಿಕ್ಕೆ ಆಗಿರಲಿಲ್ಲ. ಅವಳಿಗೆ ಕಾದು ಕಾದು ಸಾಕಾಗಿ, ಅವಳೇ ನನಗೆ ಫೋನ್ ಮಾಡಿದ್ಲು . ನಾನು ಫೋನ್ ತಗೊಳ್ತಿದ್ದ ಹಾಗೆ ನಿನದೆ ನೆನಪು ದಿನವು ಮನದಲ್ಲಿ ಅಂಥ ಹಳೆ ಕನ್ನಡ ಹಾಡು ಹೇಳೋಕೆ ಶುರು ಮಾಡಿದ್ಲು. ನಾನು ಏನಕ್ಕೆ ಈ ಹಾಡು ಹೇಳ್ತಿದಿಯ ಅಂಥ ಕೇಳಿದೆ. ಅದಕ್ಕೆ ತಕ್ಷಣ ಅವಳು ಕೋಪದ ದನಿಯಲ್ಲಿ ನನ್ನ ನೆನಪು ನಿನಗೆ ಬರೋದೇ ಇಲ್ಲವಾ ? ಅಂಥ ಕೇಳಿದ್ಲು. ಅವಳ ಆ ಪ್ರಶ್ನೆ ನನ್ನ ಮನಸಿಗೆ ಎಷ್ಟು ನಾಟಿತು ಅಂದ್ರೆ , ನಾನು ತುಂಬ ಭಾವುಕನಾಗಿ ಹೇಳಿದೆ ನನ್ನ ಕಣ್ಣಲ್ಲಿ ನೀರು ಬತ್ತಿ ಹೋಗೋ ವರೆಗೂ ನಿನ್ನ ಮರೆಯೋದಿಲ್ಲ . ಆಗ ಅವಳಿಗೆ ಆದ ಆನಂದ ಅಷ್ಟಿಷ್ಟಲ್ಲ . ಇಂಥ ಭಾವನೆಗಳೇ ಅಲ್ಲವೇ ನಮ್ಮ ಸ್ನೇಹಾನ ಬಲ ಪಡಿಸೋದು , ನಮ್ಮವರು ನಮ್ಮೊಂದಿಗೆ ಸದಾ ಇರೋ ಹಾಗೆ ಮಾಡೋದು .
ಇಂತಿ ನಿಮ್ಮ ಪ್ರೀತಿಯ ,
-Vರ ( Venkatesha ರಂಗಯ್ಯ )

Thursday, August 28, 2008

ಸಣ್ಣ ಜೋಕ್

ಒಬ್ಬ ಹುಡುಗ ಸೀರೆ ಅಂಗಡಿಯ ಶೋಕೇಸ್ ನಲ್ಲಿ ಇಟ್ಟಿದ್ದ ಗೊಂಬೆನ ದುರುಗುಟ್ಟಿಕೊಂಡು ನೋಡ್ತಾ ಇದ್ದ. ಅದನ್ನ ಕಂಡ ಅಂಗಡಿ ಮಾಲೀಕ, "ಯಾಕಪ್ಪಾ ಆ ಗೊಂಬೆನ ಹಾಗೆ ನೋಡ್ತಾ ಇದ್ದೀಯ?" ಅಂಥ ಕೇಳಿದ.
ಅದಕ್ಕೆ ಆ ಹುಡುಗ "ಗೊಂಬೆ ರವಿಕೆ ಹಾಕಿಲ್ಲ ರೀ, ಅದಕ್ಕೆ ನೋಡ್ತಾ ಇದೀನಿ ಅಂಥ ಹೇಳಿದ" .

ನೀತಿ : ಮಕ್ಕಳು ಗೊಂಬೆ ಜೊತೆ ಆಟ ಆಡ್ತಾ ದೊಡ್ಡವರು ಆಗ್ತಾರೆ. ಹಾಗಾಗಿ ನಾವು ಮಾಡೋ ಸಣ್ಣ ತಪ್ಪುಗಳು ಮಕ್ಕಳನ್ನ ತಪ್ಪು ದಾರಿಗೆ ಎಳೆಯೋದು ಬೇಡ ಅಲ್ವಾ.

-Vರ ( Venkatesha ರಂಗಯ್ಯ )

Wednesday, August 27, 2008

ಹಸಿ ಹಸಿ ಪ್ರೀತಿ

ಮನಸಿಂದು ಹಸಿಯಾಗಿದೆ
ಪ್ರೀತಿ ಮೊಳೆತಾಗಿದೆ
ಮನಸು ಬೆರೆತಾಗಿದೆ
ಮಾತು ಈಗ ಶುರುವಾಗಿದೆ
ಮೌನ ಓಡಿ ಹೋಗಿದೆ
ಹೃದಯದಲ್ಲಿ ಪ್ರೀತಿ ಇಮ್ಮಡಿಯಾಗಿದೆ.

-Vರ ( Venkatesha ರಂಗಯ್ಯ )

ಹುಡುಗರ ಆಟ

ಇವಳ ಮುಖ ಬಲು ದುಂಡು
ಇವಳ ಹಿಂದೆ ಸದಾ ಹುಡುಗರ ದಂಡು
ಮಾಯವಾಗುವಳು ಹುಡುಗರನು ಕಂಡು
ಆದರು ಬಿಡಲಿಲ್ಲ ಹುಡುಗರ ಹಿಂಡು

-Vರ ( Venkatesha ರಂಗಯ್ಯ )

Tuesday, August 26, 2008

ಕನ್ನಡಕ್ಕಾಗಿ

ನನ್ನ ಉಸಿರಿರುವರೆಗೂ ಕನ್ನಡಕ್ಕಾಗಿ ಹೋರಾಟ
ಹಾರಿಸುವೆನು ಎಲ್ಲೆಲ್ಲು ಕನ್ನಡದ ಬಾವುಟ
ಮನೆ ಮನೆಯಲ್ಲಿ ರಾರಾಜಿಸಲಿ ಕನ್ನಡಾಂಬೆಯ ಚಿತ್ರಪಟ
ಕನ್ನಡವನ್ನು ಉಳಿಸಿ ಬೆಳೆಸುವುದೇ ನನ್ನ ಹಠ.

-Vರ ( Venkatesha ರಂಗಯ್ಯ )

ಎಷ್ಟು ದಿನದ ನಂತರ

ಎಷ್ಟು ದಿನದ ನಂತರ ಕೇಳಿದೆ ನಿನ್ನ ದನಿ
ಬತ್ತಿಹೋಗಿದ್ದ ಕನಸುಗಳಿಗೆ ಸಿಕ್ಕಿತು ಜೀವ ಹನಿ
ಸೆಟೆದು ನಿಂತವು ನೆನಪುಗಳ ಪ್ರೇಮ್ ಕಹಾನಿ
ಮತ್ತೊಮ್ಮೆ ಉಸಿರು ಕಂಡ ಈ ಜೀವಕ್ಕೆ ಇಲ್ಲ ಹಾನಿ

ಎಷ್ಟು ದಿನದ ನಂತರ ಕಂಡೆ ನಿನ್ನ ಮುಖ
ಕಾದು ಕಾದು ಬಳಲಿ ಬೆಂಡಾಗಿದ್ದ ನಿನ್ನ ಸಖ
ನಿನ್ನೊಂದಿಗೆ ಮತ್ತೆ ಮರಳಿ ಬಂದಿದೆ ಸುಖ
ಇನ್ನು ಹೇಗೆ ತಾನೆ ನನ್ನ ಬಳಿ ಸುಳಿದಾಡುತ್ತೆ ದುಃಖ

ಎಷ್ಟು ದಿನದ ನಂತರ ನಕ್ಕಿತು ನನ್ನ ಹೃದಯ
ನಿನಗಾಗಿ ಮೀಸಲು ನನ್ನ ಪೂರ್ತಿ ಸಮಯ
ಜಗಳ ಬೇಜಾರು ನೋವು ಎಲ್ಲ ಮಾಯಾ
ನಲಿವು ಒಲವು ನಮಗಿರಲೆಂದು ಸದಾಶಯ

-Vರ ( Venkatesha ರಂಗಯ್ಯ )

Thursday, August 21, 2008

ಗೆಳೆಯನ ಮನಸ್ಸು ಹಾಲಿನಂತಿದ್ದರೆ...

ಈ ಪ್ರಪಂಚದಲ್ಲಿ ಎರಡು ಥರ ಜನ ಇದ್ದಾರೆ ಕಣ್ರೀ. ಒಂದು ಥರ ಜನ ಯಾವಾಗಲು negative ಆಗಿ ಯೋಚನೆ ಮಾಡ್ತಾರೆ. ಇವರು ಹುಳಿ ಇದ್ದ ಹಾಗೆ. ಇನ್ನೊಂದು ಥರ ಜನ ಇದಾರೆ, ಅವರು ಯಾವಾಗಲು positive ಆಗಿ ಯೋಚನೆ ಮಾಡ್ತಾ ಇರ್ತಾರೆ. ಇವರು ಹಾಲು ಇದ್ದ ಹಾಗೆ. positive ಆಗಿ ಯೋಚನೆ ಮಾಡೋರು ಯಾವತ್ತು negative thinking ಇರೋ ಮನುಷ್ಯರ ಸಹವಾಸ ಮಾಡಬಾರದು ಕಣ್ರೀ....ಅಪ್ಪಿ ತಪ್ಪಿ ಸಹವಾಸ ಮಾಡಿದ್ರು ಅಂದ್ರೆ ಅದು ಹಾಲು ಹುಳಿ ಸಂಬಂಧ ಥರ ಇರುತ್ತೆ ಹೊರತು ಹಾಲು ಜೇನು ಸಂಬಂಧ ಹಾಗಿರಲ್ಲ. negative thinking ಜನ ಗೆಲ್ಲೋಕೆ ಸಾದ್ಯನೇ ಇಲ್ಲ ಅಂಥ ಜೀವನ ಮಾಡ್ತಾರೆ. ಆದರೆ positive thinking ಇರೋರು ಯಾವತ್ತು ಸೋಲಲೆಬಾರದು ಅನ್ನೋ ಹಠವಾದಿಗಳು ಆಗಿರ್ತಾರೆ...ಇವರು ಪ್ರತಿಯೊಂದನ್ನು ಸವಾಲಾಗಿ ಸ್ವೀಕರಿಸ್ತಾರೆ, ಶ್ರದ್ದೆ ಇಂದ ಕೆಲಸ ಮಾಡ್ತಾರೆ. ಇವರ ನಡೆ, ನುಡಿ, ನೋಟ ಪ್ರತಿಯೊಂದರಲ್ಲೂ ವಿನಯ ಅಡಗಿರುತ್ತೆ...ಇದೆ ಕಾರಣಕ್ಕೆ ಅಲ್ವೇ ನಮಗೆ ಅಬ್ದುಲ್ ಕಲಾಮ್ ಅವರು ನಮಗೆ ಇಷ್ಟ ಆಗೋದು. ಕೊನೆದಾಗಿ ಒಂದು ಮಾತು ಹೇಳೋಕೆ ಇಷ್ಟ ಪಡ್ತೀನಿ, ನಾವು ಯಾವಾಗಲು ಒಳ್ಳೆತನವನ್ನ ರೂಡಿ ಮಾಡ್ಕೊಬೇಕು, ಕೆಟ್ಟತನದ ಅರಿವು ಸದಾ ನಮಗಿರಬೇಕು....ಹಾಗಿದ್ದಾಗ ಮಾತ್ರ ನಾವು, ನಮ್ಮ ಜನ, ನಮ್ಮ ದೇಶ ಚೆನ್ನಾಗಿರುತ್ತೆ ...

ಇಂತಿ ನಿಮ್ಮ ಪ್ರೀತಿಯ ಗೆಳೆಯ
-Vರ ( Venkatesha ರಂಗಯ್ಯ )

ಕನ್ನಡ ತಾಯಿಗೆ ನಮನ

ಎದ್ದೇಳಿ ಕನ್ನಡಿಗರೆ ಎದ್ದೇಳಿ
ಹರಡಲು ಕರುನಾಡ ಕಂಪನ್ನು
ಹಾಡಲು ಕನ್ನಡದ ಹಾಡನ್ನು

ಭಕ್ತಿ ಕೀರ್ತಿ ಹೊತ್ತು ಮೆರೆವ ನಾಡು ನಮ್ಮ ಕರ್ನಾಟಕ
ಊರುಗಳು ಸಾವಿರಾರು ಭಾವನೆಗಳು ನೂರಾರು
ನಮ್ಮ ಭಾಷೆ ಒಂದೆ ಕನ್ನಡ

ಬನ್ನಿ ಕನ್ನಡಿಗರೆ ಬನ್ನಿ ಕನ್ನಡಕ್ಕಾಗಿ ದುಡಿಯೋಣ ಬನ್ನಿ
ಎಲ್ಲರು ಸೇರಿ ಮೊಳಗಿಸೋಣ ಕರ್ನಾಟಕದ ಕಹಳೆಯನ್ನು
ಒಟ್ಟಾಗಿ ಮೆರೆಸೋಣ ಕರ್ನಾಟಕ ಕೀರ್ತಿಯನ್ನು

ಕೆಂಪೇಗೌಡರು ಕಟ್ಟಿದರು ಬೆಂಗಳೂರು
ರಾಜ ಮಹಾರಾಜರು ಆಳಿದರು ಮೈಸೂರು
ಶಿಲ್ಪಕಲೆಗಳಿಗೆ ಹೆಸರಾದವು ಹಳೇಬೀಡು ಬೇಲೂರು

ಕಾವೇರಿ ಹುಟ್ಟಿ ಹರಿಯುತಿಹಳು ಕೊಡಗಿನಲ್ಲಿ
ಶರಾವತಿ ದುಮ್ಮುಕ್ಕಿ ಹರಿಯುತಿಹಳು ಜೋಗದಲ್ಲಿ
ಶ್ರೇಷ್ಠ ಕವಿಗಳ ಕವಿಸಾರ ಹರಿಯಿತು ಕರ್ನಾಟಕದಲ್ಲಿ

ಬನ್ನಿ ಕನ್ನಡಿಗರೆ ಒಗ್ಗಟ್ಟಾಗಿ ಬನ್ನಿ
ಕನ್ನಡ ನಾಡು ನುಡಿಯ ಉಳಿಸೋಣ ಬನ್ನಿ
ಕನ್ನಡಾಂಬೆಯ ಆಶೀರ್ವಾದ ಪಡೆಯೋಣ ಬನ್ನಿ

-Vರ ( Venkatesha ರಂಗಯ್ಯ )

Wednesday, August 13, 2008

ದಪ್ಪ ಸುಂದರಿ

ಎಷ್ಟು ದಪ್ಪ ಈ ಸುಂದರಿ
ಎಷ್ಟು ದಪ್ಪ ಈ ಸುಂದರಿ
ಇವಳಿಗೆ ಕೂರಲು ಬೇಕು ಎರಡು ಸೀಟು ರೀ !!!

-Vರ ( Venkatesha ರಂಗಯ್ಯ )

Thursday, July 31, 2008

ಸಖತ್ ಸುಂದರಿ

ನಾನು ಪ್ರತಿದಿನ ಹಿಂಬಾಲಿಸುತ್ತಿದ್ದ
ಹುಡುಗಿ ಸಖತ್ ಸುಂದರಿ
ನನಗೆ ರಾಖಿ ಕಟ್ಟಿದಾಗಿನಿಂದ
ಅವಳು ನನ್ನ ಸಹೋದರಿ !!!


-Vರ ( Venkatesha ರಂಗಯ್ಯ )

Thursday, July 24, 2008

ಬೆಚ್ಚಗೆ ನಿನ್ನ ನೆನಪು

ಮುಂಜಾನೆಯ ಚಳಿಯಲ್ಲಿ ಬೆಚ್ಚಗೆ ನಿನ್ನ ನೆನಪು
ನೆನೆ ನೆನೆದು ನಿನ್ನ ಹೆಸರ ಕನವರಿಸುತಿದೆ ಮನವು
ಹುಡುಕಿದರೂ ಸಿಗಲಿಲ್ಲ ಎಲ್ಲು ನಿನ್ನ ಸುಳಿವು
ಮನದಾಳದಲ್ಲಿ ಕಾಡುತಿದೆ ನೀ ಬಿಟ್ಟು ಹೋದ ಒಲವು

ಸೂರ್ಯನು ಬರುವ ಮುಂಚೆಯೇ ನಿನ್ನ ನೋಡಬೇಕೆಂಬ ಕಾತುರ
ಮಲ್ಲಿಗೆ ಅರಳುವ ಮುನ್ನ ನಿನ್ನ ಮಾತಾಡಿಸಬೇಕೆಂಬ ಆತುರ
ನಿನ್ನ ಇಷ್ಟು ಕಾಡೋಕೆ ಕಾರಣ ನೀ ಕೊಟ್ಟ ಸದರ
ನಿನ್ನ ಜೊತೆ ನಾ ಕಳೆದ ಕಾಲ ಬಲು ಮಧುರ

-Vರ ( Venkatesha ರಂಗಯ್ಯ )

Wednesday, July 16, 2008

'ಕರೆ'ನ್ಸಿ

ಬರಲಿಲ್ಲ ನನ್ನವಳಿಂದ ಕರೆ
ಬರಲಿಲ್ಲ ನನ್ನವಳಿಂದ ಕರೆ
ಕಾರಣ ಅವಳ ಮೊಬೈಲಿನಲ್ಲಿ ಇಲ್ಲ 'ಕರೆ'ನ್ಸಿ !!!

-Vರ ( Venkatesha ರಂಗಯ್ಯ )

Friday, July 11, 2008

ಯಾಕೆ ಹೀಗಾಯ್ತು ???

ಹೂವಿನ ಅಂದ ಮೈಯರಳಿ ನಿಲ್ಲುವುದು ಕಿರಣಗಳ ಸ್ಪರ್ಶದಿಂದ
ದುಂಬಿಯೊಂದು ಹರ್ಷಿಸುವುದು ಪರಿಮಳ ಭರಿತ ಮಲ್ಲಿಗೆಯ ರಸಪಾನದಿಂದ
ಪದಗಳು ಹುಟ್ಟುವುದು ನಿನ್ನ ಅಂದದಿಂದ
ಮೈಮರೆತು ಹಾಡೊಂದು ಗುನುಗುತಿರುವೆನು ನಿನ್ನ ನಾ ಕಂಡ ಕ್ಷಣದಿಂದ !!!

-Vರ ( Venkatesha ರಂಗಯ್ಯ )

ಮಲ್ಲಿಗೆ ಪರಿಮಳ

ನೀ ಮುಡಿದ ಮಲ್ಲಿಗೆಯ ಪರಿಮಳ
ಇಂದೇಕೋ ನನ್ನೆದೆಯಲ್ಲಿ ತಳಮಳ
ಬಾಡದಿರಲಿ ನೀ ಮುಡಿದ ಮಲ್ಲಿಗೆ
ನಾ ಬರುವೆ ನಿನ್ನ ಸನಿಹ ಮೆಲ್ಲಗೆ!!!

-Vರ ( Venkatesha ರಂಗಯ್ಯ )

ಆಸೆ

ನೀನೊಂದು ಕಡಲು, ನಾನೊಂದು ನದಿ
ನಿನ್ನ ಸೇರುವುದೇ ನನ್ನ ಗುರಿ
ಅದಕ್ಕಾಗಿ ಹುಡುಕುತಿಹೆ ಹರಿಯುವ ದಾರಿ
ನೀ ಈಗ ಎಲ್ಲಿರುವೆ ನಾರಿ
ನಾ ಬರೋದು ಲೇಟಾದರೆ ಸಾರಿ!!!

-Vರ ( Venkatesha ರಂಗಯ್ಯ )

ಕನಸಿನ ಮಾತುಗಳು

ನೀ ನನ್ನ ಕನಸಿಗೆ ಬಂದು ಹಾಡುವಾಗ ಕವನ
ಎಲ್ಲ ನೋವು ಮರೆತು ನಿನ್ನೆಡೆಗೆ ತಿರುಗಿತು ನನ್ನ ಗಮನ
ಕಂಗಾಲಾದ ಮನಸಿನ ಭಾರ ಇಳಿಸಿದ ನಿನಗೆ ನನ್ನ ನಮನ
ಕಣ್ಣಿಂದಲೇ ಸ್ಪರ್ಶಿಸಿದ ಮನಸು ಪಾವನ

ನಾ ನಿನ್ನ ಕನಸಿಗೆ ಬಂದು ಹೋದರೆ
ನನಗಿರಲಿ ಒಂದೇ ಒಂದು ದೂರವಾಣಿ ಕರೆ
ನಾ ನಿನ್ನ ಮಾತನು ಕೇಳದೆ ಇನ್ನು ಇರಲಾರೆ
ನಿನ್ನ ನಾ ನೋಡದೆ ಕ್ಷಣಕಾಲವು ಜೀವಿಸಲಾರೆ

ಕನಸಿನ ಕನ್ನಡಿಯಲ್ಲಿ ಕಾಣುತಿದೆ ನಿನ್ನದೇ ಮುಖವು
ಮನಸಿನ ಮುಖ ಪುಟದಲ್ಲಿ ಕುಳಿತಿದೆ ನಿನ್ನದೇ ಚಿತ್ರವು
ಬಾಳಿನ ಮುನ್ನುಡಿ ತುಂಬ ನಿನ್ನದೇ ಹೆಸರು
ನಿನ್ನಿಂದಲೇ ನನ್ನ ಬಾಳು ಹಸಿರು

-Vರ ( Venkatesha ರಂಗಯ್ಯ )

ಬಿಟ್ಟು ಹೋದವಳಿಗಾಗಿ

ನಾನು ಪ್ರೀತಿಸಿದ ಹುಡುಗಿ ನನ್ನ ಪ್ರೀತಿಸಲಿಲ್ಲ
ನನ್ನ ಪ್ರೀತಿಸಿದ ಹುಡುಗಿಯ ನಾ ಪ್ರೀತಿಸಲಿಲ್ಲ
ಜೀವನದುದ್ದಕ್ಕೂ ಒಂಟಿತನವೇ ಕಾಡಿತಲ್ಲ
ಸುಖ ದುಃಖಗಳೆರಡು ನನ್ನಲ್ಲೇ ಹಂಚಿ ಹೋದವಲ್ಲ

ಅವಳಿಗಾಗಿ ನಾ ಮಾಡಿದೆ ಎಲ್ಲ ತ್ಯಾಗ
ಬಯಸುವೆ ಅವಲಿಗಿರಲೆಂದು ಸದಾ ಭೋಗ
ಚಡಪಡಿಸುತ್ತಿರುವ ಮನಕೆ ಬೇಕು ಒಲವಿನ ಸಹಯೋಗ
ಕಾಯುತಿರುವುದು ಹೃದಯ ಸ್ವೀಕರಿಸಲು ಪ್ರೀತಿಯ ವಿನಿಯೋಗ

-Vರ ( Venkatesha ರಂಗಯ್ಯ )

ಮಿಂಚಿನ ಬಳ್ಳಿ

ನಿನ್ನ ಕುಡಿನೋಟವು ಇಡುತಿದೆ ಕಚಗುಳಿ
ನಿನ್ನ ಮೈಮಾಟವು ತರುತಿದೆ ಬಿಸಿಗಾಳಿ
ಮುಡಿಯ ಹೂಗುಚ್ಚವು ಸೂಸುತಿದೆ ಕಂಪನಿಲ್ಲಿ
ನಿನ್ನ ಜಲಕ್ ಜಲಕ್ ನಗೆಗೆ ನಾ ಸೋತೆ ಮಿಂಚಿನ ಬಳ್ಳಿ!!!

-Vರ ( Venkatesha ರಂಗಯ್ಯ )

Wednesday, July 9, 2008

ಜಣ ಜಣ ಕಾಂಚಾಣ

ಬಂದೆರಗಿ ಅಪ್ಪಳಿಸೂಲ್ಲ ಅದೃಷ್ಟ
ಸಾದಿಸೋಕೆ ಪಡಲೇಬೇಕು ಕಷ್ಟ
ಕುಳಿತಿರುವವನ ಹುಡುಕಿಕೊಂಡು ಬರೋಲ್ಲ ಕಾಂಚಾಣ
ದುಡಿಯುವವನ ಬಳಿ ಮೆರೆಯುವುದು ಜಣ ಜಣ

-Vರ ( Venkatesha ರಂಗಯ್ಯ )

ಸೊಂಟದ ವಿಷಯ

ತಳುಕು ಬಳುಕು ಸೊಂಟ
ನಾನು ಅದರ ನೆಂಟ
ಹಿಡಕೊಂಡೇ ಅವಳ ಸೊಂಟ
ಜನವೆಲ್ಲ ಸೇರಿ ಮಾಡಿದ್ರು ನನ್ನ ಕುಂಟ !!!

-Vರ ( Venkatesha ರಂಗಯ್ಯ )

ಸ್ಕೂಟಿ ಬ್ಯೂಟಿ

ಬಳ್ಳಿಯಲ್ಲಿ ಹೂ ಕಂಡು ದುಂಬಿ ಹಾರಿತು
ಕಡಲು ಸೇರೋ ದಾರಿ ಕಂಡು ನದಿ ಹರಿಯಿತು
ಬರಡು ಭೂಮಿ ತಣಿಸಲೆಂದು ಮಳೆ ಸುರಿಯಿತು
ಸ್ಕೂಟಿ ಬ್ಯೂಟಿ ಕಂಡು ಹೃದಯ ಹಾಡಿತು!!!

-Vರ ( Venkatesha ರಂಗಯ್ಯ )

ಬಣ್ಣದ ಮಹಿಮೆ

ಅರಿಶಿನ ಚೆಂದನದಂತೆ ಹೊಳೆಯುತ್ತಿದೆ ನಿನ್ನ ಮೈ ಬಣ್ಣ
ನಿನ್ನ ಕಂಡಾಗಲೆಲ್ಲ ನನ್ನ ಮೈ ತುಂಬ ಚುಮು ಚುಮು ಕಂಪನ
ನಿನ್ನನ್ನು ಕಂಡರೆ ಕಣ್ಣು ಹೊಡೆಯದೆ ಇರುವನೇ ಕಾಮಣ್ಣ !!!

-Vರ ( Venkatesha ರಂಗಯ್ಯ )

ನಿನ್ನಿಂದ

ಕತ್ತಲೆ ತುಂಬಿರುವ ಬಾಳಲ್ಲಿ
ನೀ ಬಂದೆ ಬೆಳಕು ಚೆಲ್ಲಿ
ಹತ್ತಿ ಉರಿಯುತ್ತಿತ್ತು ಬೇಸರ ಮನದಲ್ಲಿ
ಮಾಯವಾಯಿತು ಬೇಸರ ನೀ ಪಕ್ಕ ನಿಂತಲ್ಲಿ !!

-Vರ ( Venkatesha ರಂಗಯ್ಯ )

ಕಾರಣ

ಮೋಡ ಕವಿದ ವಾತಾವರಣ
ಮುಸುಕು ಕವಿದ ಅಂತಃಕರಣ
ಕಳೆದು ಹೋಗಿದೆ ಬಾಳ ಕವಿತೆಯ ಚರಣ
ಹುಡುಕಬೇಕಿದೆ ಇದಕೆಲ್ಲ ಕಾರಣ!!

-Vರ ( Venkatesha ರಂಗಯ್ಯ )

Tuesday, July 8, 2008

ಕಾಲಿಂಗ್ ಬಿಲ್

ನನ್ನ ಮೊಬೈಲ್ ಕನೆಕ್ಷನ್ ಏರ್ ಟೆಲ್

ನಿಂದು ಯಾವುದು ಪ್ಲೀಸ್ ಟೆಲ್

ಒಂದು ರೂಪಾಯಿ ಹೋಗುತ್ತೆ ಮಾಡಿದ್ರೆ ಒಂದು ಕಾಲ್

ನಿರಂತರವಾಗಿ ಫೋನ್ ಮಾಡ್ತಿದ್ರೆ ಬರುತ್ತೆ ಜಾಸ್ತಿ ಬಿಲ್

ನಾನು ಫೋನ್ ಮಾಡಲ್ಲ ಅಂಥ ಆಗಬೇಡ ಡಲ್

ತಪ್ಪದೆ ದಿನ ಎಸ್ಸೆಮ್ಮೆಸ್ ಮಾಡ್ತೀನಿ ಮೇರಾ ದಿಲ್ !!!

-Vರ ( Venkatesha ರಂಗಯ್ಯ )

ಕನ್ನಡ ಕನ್ನಡ ಕನ್ನಡ

ನಾ ಕುಡಿಯುವ ಜಲ ಕಾವೇರಿ
ನಾ ಮೆಟ್ಟುವ ನೆಲ ಕರುನಾಡು
ನಾ ಬೆರೆಯುವ ಜನ ಕನ್ನಡಿಗರು
ನನ್ನ ತನು ಮನ ಕಣ ಕಣದಲ್ಲು
ಕನ್ನಡ ಕನ್ನಡ ಕನ್ನಡ

-Vರ ( Venkatesha ರಂಗಯ್ಯ )

ಅನುಪಮ

ಇವಳ ಮುಖ ಹುಣ್ಣಿಮೆ ಚಂದ್ರಮ
ಇವಳ ಮಾತಿನಲ್ಲಿ ಘಮ ಘಮ
ಇವಳು ಸಂಗೀತದಲ್ಲಿ ಸರಿಗಮ
ಇವಳೇ ನನ್ನ ಅನುಪಮ

-Vರ ( Venkatesha ರಂಗಯ್ಯ )

ಮಾಯಾಂಗಿನಿ ಮೋಡಿ

ಕಣ್ಣಿಗೆ ಕಾಣದ ಮಾಯೆಯೊಂದು ಮಾಡುತಿದೆ ಮೋಡಿ ಇಂದು
ಸೆಳೆಯುತಿದೆ ನನ್ನನ್ನು , ಕೆದಕುತಿದೆ ಅಂತರಂಗವನ್ನು
ಅದ್ಯಾವ ಮಾಯೆಯೋ , ಅದ್ಯಾವ ಮೋಡಿಯೋ ಅರಿಯದಾಗಿದೆ
ಸೋಲಿಲ್ಲದ ಸರದಾರ ನಾನು, ಸೋತು ಹೋಗುವೆನೆ ಈ ಮಾಯೆಗೆ
ತೀರಗಳಿಂದಾಚೆಗೆ ಕರೆದುಕೊಂಡು ಹೋಗಲೆಂದೆ ಬಂದಿವುದೆ ಈ ಮಾಯೆ
ಮರುಭೂಮಿಯಂತ ಮನಸಿಗೆ ನೀರೆರೆಯಲು ಬಂದಿರುವಳೇ ಈ ಮಾಯೆ
ಸ್ಥಿರವಾದ ಮನಸನು ವಿಚಲಿತಗೊಳಿಸಿದ ಮಾಯೆ ನೀನು
ಯಾರಿವಳು ಈ ಮಾಯೆ , ಎಲ್ಲಿಂದ ಬಂದಿಹಳು ಈ ಮಾಯೆ
ಕುಳಿತಿರುವವನ ಎಬ್ಬಿಸಿ ನಡೆಸುತಿರುವಳು ಈ ಮಾಯೆ
ಹಸಿವಿಲ್ಲದವನಿಗೆ ಹಸಿವು ತಂದು ಕೊಟ್ಟಳು ಈ ಮಾಯೆ

-Vರ ( Venkatesha ರಂಗಯ್ಯ )





ಮೊದಲ ಹನಿ

ಬೇಲೂರ ಬಾಲೆಯರಿಗೆಲ್ಲ
ಕಡಿಮೆಯಾಗಿದೆ ಬೇಡಿಕೆ
ಕಾರಣ ಬೆಂಗಳೂರ ಬಾಲೆಯರೆಲ್ಲ
ತೋಡುವುದನ್ನ ಬಿಟ್ಟಿದ್ದಾರೆ ರವಿಕೆ!!

-Vರ ( Venkatesha ರಂಗಯ್ಯ )