Thursday, August 21, 2008

ಗೆಳೆಯನ ಮನಸ್ಸು ಹಾಲಿನಂತಿದ್ದರೆ...

ಈ ಪ್ರಪಂಚದಲ್ಲಿ ಎರಡು ಥರ ಜನ ಇದ್ದಾರೆ ಕಣ್ರೀ. ಒಂದು ಥರ ಜನ ಯಾವಾಗಲು negative ಆಗಿ ಯೋಚನೆ ಮಾಡ್ತಾರೆ. ಇವರು ಹುಳಿ ಇದ್ದ ಹಾಗೆ. ಇನ್ನೊಂದು ಥರ ಜನ ಇದಾರೆ, ಅವರು ಯಾವಾಗಲು positive ಆಗಿ ಯೋಚನೆ ಮಾಡ್ತಾ ಇರ್ತಾರೆ. ಇವರು ಹಾಲು ಇದ್ದ ಹಾಗೆ. positive ಆಗಿ ಯೋಚನೆ ಮಾಡೋರು ಯಾವತ್ತು negative thinking ಇರೋ ಮನುಷ್ಯರ ಸಹವಾಸ ಮಾಡಬಾರದು ಕಣ್ರೀ....ಅಪ್ಪಿ ತಪ್ಪಿ ಸಹವಾಸ ಮಾಡಿದ್ರು ಅಂದ್ರೆ ಅದು ಹಾಲು ಹುಳಿ ಸಂಬಂಧ ಥರ ಇರುತ್ತೆ ಹೊರತು ಹಾಲು ಜೇನು ಸಂಬಂಧ ಹಾಗಿರಲ್ಲ. negative thinking ಜನ ಗೆಲ್ಲೋಕೆ ಸಾದ್ಯನೇ ಇಲ್ಲ ಅಂಥ ಜೀವನ ಮಾಡ್ತಾರೆ. ಆದರೆ positive thinking ಇರೋರು ಯಾವತ್ತು ಸೋಲಲೆಬಾರದು ಅನ್ನೋ ಹಠವಾದಿಗಳು ಆಗಿರ್ತಾರೆ...ಇವರು ಪ್ರತಿಯೊಂದನ್ನು ಸವಾಲಾಗಿ ಸ್ವೀಕರಿಸ್ತಾರೆ, ಶ್ರದ್ದೆ ಇಂದ ಕೆಲಸ ಮಾಡ್ತಾರೆ. ಇವರ ನಡೆ, ನುಡಿ, ನೋಟ ಪ್ರತಿಯೊಂದರಲ್ಲೂ ವಿನಯ ಅಡಗಿರುತ್ತೆ...ಇದೆ ಕಾರಣಕ್ಕೆ ಅಲ್ವೇ ನಮಗೆ ಅಬ್ದುಲ್ ಕಲಾಮ್ ಅವರು ನಮಗೆ ಇಷ್ಟ ಆಗೋದು. ಕೊನೆದಾಗಿ ಒಂದು ಮಾತು ಹೇಳೋಕೆ ಇಷ್ಟ ಪಡ್ತೀನಿ, ನಾವು ಯಾವಾಗಲು ಒಳ್ಳೆತನವನ್ನ ರೂಡಿ ಮಾಡ್ಕೊಬೇಕು, ಕೆಟ್ಟತನದ ಅರಿವು ಸದಾ ನಮಗಿರಬೇಕು....ಹಾಗಿದ್ದಾಗ ಮಾತ್ರ ನಾವು, ನಮ್ಮ ಜನ, ನಮ್ಮ ದೇಶ ಚೆನ್ನಾಗಿರುತ್ತೆ ...

ಇಂತಿ ನಿಮ್ಮ ಪ್ರೀತಿಯ ಗೆಳೆಯ
-Vರ ( Venkatesha ರಂಗಯ್ಯ )

No comments: