Tuesday, October 7, 2008

ಜಿಪುಣ ನನ್ನ ಗಂಡ

ಮೈಸೂರು ದಸರೆಗೆ ಹೋಗೋಣ ಬಾರೇ
ಚಾಮುಂಡಿ ದೇವಿಯ ಅಂಬಾರಿ ನೋಡೋಣ ಬಾರೇ
ಜಗಮಗಿಸುತಿದೆ ಮೈಸೂರು ಬೆಳಕಲ್ಲಿ
ಕೈ ಬೀಸಿ ಕರೆಯುತಿದೆ ರಂಗವಲ್ಲಿ
ಜಟಕಾ ಕುದುರೆ ಹತ್ತಿ ಮೈಸೂರು ಸುತ್ತೋಣ
ಕೃಷ್ಣ ರಾಜ ಸಾಗರದಲ್ಲಿ ಮೈ ಮರೆಯೋಣ
ಜೇಬ್ರ ಕೋಬ್ರಾ ಹುಲಿ ಸಿಂಹ zooನಲ್ಲಿ
ಸೂಟು ಬೂಟು ರಾಜಾಸೀಟು ಅರಮನೆಯಲ್ಲಿ
ಇನ್ನೇನು ನೋಡಬೇಕು ಕೇಳು ಜಾಣೆ
ಗ್ಯಾರೆಂಟಿ ಕರಕೊಂಡು ಹೋಗ್ತೀನಿ ನಿನ್ನಾಣೆ
ಬರೀ ಸುಳ್ಳು ಬರೀ ಸುಳ್ಳು ನಾನು ನಂಬೋದಿಲ್ಲ
ನಾನು ಕರಕೊಂಡು ಹೋಗೋಕೆ ಹೇಳಿದ್ದು ಲಲಿತ್ ಮಹಲ್ ಗೆ
ಆದ್ರೆ ನೀವು ಕರಕೊಂಡು ಹೋಗಿದ್ದು ಒಂಟಿಕೊಪ್ಪಲ್ ಗೆ
ನಾನು ನಂಬೋದಿಲ್ಲ ನಿಮ್ಮನ್ನ ನಾನು ನಂಬೋದಿಲ್ಲ .


ಇಂತಿ ನಿಮ್ಮ ಪ್ರೀತಿಯ
-Vರ ( Venkatesha ರಂಗಯ್ಯ )

No comments: