Wednesday, September 10, 2008

ಮುಂಗಾರು ಮಿಂಚು

ಮುಂಗಾರಿನ ಮಿಂಚಂತೆ ನನ್ನೆದುರು ನೀ ಬಂದೆ
ಮತ್ತೆ ಸುಳಿವಿಲ್ಲದಂತೆ ಮರೆಯಾಗಿ ಹೋದೆ
ಸುರಿದಿತ್ತು ಕಂಬನಿ ನನ್ನೆದೆಯಲ್ಲಿ ನೀನಿಲ್ಲದೆ
ಕಣ್ಣ ಹನಿಗಳು ಬೋರ್ಗರೆಯುತ್ತಿವೆ ನಿನ್ನನ್ನು ಕರೆಯಲು
ಪ್ರತಿಯೊಂದು ಹನಿ ಇಂದು ಹೇಳುತಿದೆ ಮಾತೊಂದು
ಬಯಸುತಿದೆ ಮನಸಿಂದು ನೀ ಸನಿಹ ಬೇಕೆಂದು
ನನ್ನ ಹೃದಯವನು ಕದ್ದೆ ಜೊತೆಯಲ್ಲೇ ನಿದ್ದೆಯನು ಕದ್ದೆ
ನಿನ್ನ ನೋಡಲಾರದೆ ಮುಚ್ಚಲೊಪ್ಪವು ಕಣ್ಣುಗಳು
ಕಾರ್ಮೋಡ ಧರೆಗಿಳಿಯಲು ಕಾದಿರುವಂತೆ
ತುದಿಗಾಲಲ್ಲಿ ನಿಂತು ನಿನಗಾಗಿ ನಾ ಕಾಯುತಿರುವೆ.

-Vರ ( Venkatesha ರಂಗಯ್ಯ )

No comments: