Tuesday, September 9, 2008

ನಟಸಾರ್ವಭೌಮನಿಗೆ ನಮಸ್ಕಾರ

ಕನ್ನಡ ನಾಡಿನ ಹೆಮ್ಮೆಯ ಕುವರ
ನಮ್ಮ ನಿಮ್ಮೆಲ್ಲರ ರಾಜಕುಮಾರ
ಹುಟ್ಟಿದ್ದು ತಾಯಿಯ ತವರೂರಾದ ಗಾಜನೂರು
ಹುಟ್ಟಿ ಬೆಳೆಯಿತು ಇವರ ಅಭಿಮಾನಿ ಬಳಗ ಸಾವಿರಾರು
ನಡೆ ನುಡಿಯಲ್ಲಿ ಇವರೆಂದು ಸರಳ ಸಜ್ಜನ
ಆದರು ಸೆಳೆದು ಹಿಡಿದಿಟ್ಟಿತು 108 ದಿನ ಕಾನನ
ಒಲಿದು ಬಂದವು ಇವರಿಗೆ ಪ್ರಶಸ್ತಿಗಳು ಅನೇಕಾನೇಕ
ತರಲಿಲ್ಲ ಅವು ಎಂದು ಗರ್ವ ಅಹಂಕಾರ
ಹಾಡಿ ಹರಡಿದರು ಕನ್ನಡದ ಕಂಪನ್ನು
ಬೆಳೆಸಿದರು ಮುಗಿಲೆತ್ತರಕೆ ಕನ್ನಡವನ್ನು
ಗಳಿಸಿದರು ಈ ನಾಡ ಜನರ ಪ್ರೀತಿಯನ್ನು
ದೀಪ ಹಾರಿ ಹೋಯಿತಾದರೂ ಕೊಟ್ಟ ಬೆಳಕು ನಿರಂತರ
ಜನ ಮಾನಸದಲ್ಲಿ ರಾಜಣ್ಣ ಎಂದೆಂದೂ ಅಜರಾಮರ

-Vರ ( Venkatesha ರಂಗಯ್ಯ )

No comments: